ಪರಿವರ್‍ತನೆ

ಯಾಕೋ ಈಗೀಗ ಊರಿಗೆ ಹೋಗಂಗಾಗುವುದಿಲ್ಲ
ಯಾವುದೊಂದು ಆಗಿದ್ದ೦ಗೀಗಿಲ್ಲ
ಎಲ್ಲಾ ಬದಲಾಗಿ ಬಿಟ್ಟಿದೆ,
ಯಾರಿದ್ದಾರೆ ಆಗಿನವರು?
ಎಲ್ಲಾ ಹೊಸಬರೇ ತುಂಬಿಹರು ಊರು ತುಂಬಾ
ಆಗಿದ್ದಂಗೆ ಯಾರಿದ್ದಾರೆ ಈಗ ?

ನಗ ನಗ್ತಾ ಕರೆದು ಮಾತಾಡೋರಿಲ್ಲ
ಹರ್ಷೋಲ್ಲಾಸ ತೋರುವರಿಲ್ಲ
ಮನೆಯಲ್ಲೂ ಕೂಡಾ ಅಷ್ಟೆ ಆಗಿದೆ
ಅಪ್ಪ, ಅಮ್ಮನಿಗೆ ವಯಸ್ಸಾಗಿ, ಶಕ್ತಿ, ಧ್ವನಿ ಉಡುಗಿಹೋಗಿ
ಚಲಾವಣೆಯ ಕಳೆದು ಕೊಂಡಿಹರು
ಮಾಡಿದ್ದು ಉಣ್ಣಬೇಕು, ಬಾಯ್ಮುಚ್ಚಿಕೊಂಡಿರಬೇಕು

ನಾನೇನಾದರೂ ಊರಿಗೆ ಹೋದರೆ
ಒಂದೇ ಸಮನೆ ಹೊಟ್ಟೆ ಸುಟ್ಟುಕೊಳ್ಳುವರು
ಇಲ್ಲೊಂದು ನನ್ಮನೆ ಇದೆಯೆಂದು ಆಮಗಾ
ಊರಿಂದ ಬಂದರೆ
ಇವರು ನೋಡಲ್ಲ ಮಾಡಲ್ಲ’ ಎಂದು
ಹೀಗಿರುವಾಗ ಮೇಲಿಂದ ಮೇಲೆ ನಾನ್ಯಾಕೆ ಹೋಗಿ
ಅವರ ಗಾಯದ ಮೇಲೆ ಬರೆ ಎಳೆದು ಬರಬೇಕು.

ನನಗೆ ಅವರ ಒಂದು ಕೊರಗಾಗಿ ಬಿಟ್ಟಿದೆ
ಹೋದರೆ ಒಂದು.. ಹೋಗದಿದ್ದರೆ ಇನ್ನೊಂದು
ಹೋಗಿ ಬಂದು ಮಾಡದೆ ಇದ್ದರೆ
ಎಲ್ಲರೂ ದೂರಾಗಿ ಬಿಟ್ಟರುಯೆಂದು ನೊಂದು ಕೊಳ್ಳುವರು.
ಈಗ ಅಣ್ಣ ಅತ್ತಿಗೆದೇ ಎಲ್ಲಾ ಕಾರುಬಾರು
ಅವರೆಲ್ಲಾ ಗಮನ ತಮ್ಮ ತಮ್ಮ ಮಕ್ಕಳ ಕಡೆಗೆ
ಹೊಸದಾಗಿ ಬೆಳೆದಂತ ಸಂಬಂಧದ ಕಡೆಗೆ
ಅಣ್ಣ ತಮ್ಮಂದಿರು ಒಂದಾಗಿ ಇದ್ದವರು ಬೇರೆ ಆಗಿದ್ದಾರೆ
ಒಬ್ಬರ ಮುಖ ಒಬ್ಬರಿಗಿಲ್ಲ
ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗಲ್ಲ
ಸಣ್ಣದ್ದು, ಪುಟ್ಟದ್ದಕ್ಕೆ… ಕಡಿದಾಟ, ಬಡಿದಾಟ
ರಕ್ತ ಸಂಬಂಧದ ಅರ್ಥವನ್ನೇ ಕೆಡಿಸಿಹರು.

ನೆಟ್ಟ ನೇರನೆ ಒಂದೇ ಒಂದು ಮಾತಿಲ್ಲ
ಬಾಯಿ ಬಿಟ್ಟರೆ ಸಾಕು ಬರಿಕೊಂಕು ಡೊಂಕು
ತಮ್ಮ ತಮ್ಮದೆ ಅವರಿಗೆ ದೊಡ್ಡದಾಗಿ ಬಿಟ್ಟಿಹದು
ಹೋದರೂ ಕೂಡ ಮುಖ ಕೊಟ್ಟು ಸರಿಯಾಗಿ ಮಾತಾಡುವುದಿಲ್ಲ
ಒಳ್ಳೆದೊಂದು ಮಾತಿಲ್ಲ ಕತೆಯಿಲ್ಲ
ಬಂದವಳೆ ಅಂದರೆ ಯಾಕಂತೆ? ಅನ್ನದಾಗ
ಹೋಗೋದರಲ್ಲೇನಾದರೂ ಆರ್ಥ ವಿದೆಯಾ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮೊಳಗೊಬ್ಬ ನಾಜೂಕಯ್ಯ
Next post ಸೇವೆ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys